Saturday, May 2, 2009

ಭಾವಾಂತರಂಗ-೨

ಇದಕ್ಕೊಂದು ಹೆಸರಿಡೆ.......

ಪ್ರತಿದಿನ ಬೆಳಗಾದ್ರೆ ಸಾಕು. . . "ಇಬ್ಬನಿಯ ಧರೆಗೆ ಜಾರುತಿದೆ. .. . ಮೊಗ್ಗು ಹೂವಾಗುತ್ತಿದೆ. . . . , ಆ ಹೂವ ಎದೆಯನ್ನು ದುಂಬಿ ಚುಂಬಿಸುತ್ತಿದೆ. . ..ಸೂರ್ಯನ ಕಿರಣಗಳಿಗೆ ಭೂಮಿತಾಯಿ ಸ್ವಾಗತ ಕೋರುತ್ತಿದೆ. ದೂರದೂರಿನಿಂದ ಹತ್ತಿರದವರಿಗೆ ನಿಮ್ಮ ಕಮೀಶನ ಸಂದೇಶವು ಹೇಳುತ್ತಿದೆ 'ಶುಭೋದಯ'. . ಎಂದು 'ತಾನ್ಯ' ಅವರಿಗೆ ನನ್ನ ಮೊಬೈಲ್ ನಿಂದ ಒಂದು ಸಂದೇಶ ರವಾನಿಸುತ್ತೇನೆ. . . .ಇಲ್ಲಿ ಇನ್ನೊಂದು ವಿಷಯ ಹೇಳಲೇಬೇಕು. "ತಾನ್ಯ ಅವರನ್ನು ನೆನಪಿಸಿಕೊಂಡಾಗಲೆಲ್ಲಾ. .. ಅಥವಾ ನಾನೇ ಅವರಿಗೊಂದು ಫೋನ್ ಮಾಡಬೇಕೆಂದುಕೊಂಡಾಗಲೆಲ್ಲಾ.. ತಾನ್ಯ ಅವರಿಂದಲೇ ಒಂದು ಮೆಸೇಜ್ ನನ್ನ ಮೊಬೈಲ್ ಗೆ ಬಂದದ್ದಿದೆ. ಕೆಲವೊಮ್ಮೆ ಅವರೇ ಫೋನ್ ಮಾಡಿದ್ದಿದೆ.. . ಇನ್ನು ಕೆಲವೊಮ್ಮೆ ಅವರೇ ಎದುರಿಗೆ ಸಿಕ್ಕಿ. . ."ನಮಸ್ಕಾರ. .. .ಹೇಗಿದ್ದೀರಾ. . ? ಅಂತ ಕೇಳಿದ್ದಿದೆ." ಅವರಿಗೆ ಈ ರೀತಿ ಆದ ವಿಷಯ ಹೇಳಿದ್ದೆ. ಆಗ ಅವರು ನೂರು ವರ್ಷ ಬೇಡಪ್ಪಾ ಎಷ್ಟಿದಿಯೋ ಅಷ್ಟೇ ಸಾಕು ಅಂದಿದ್ದರು. . .ಜೊತೆಗೊಂದು ಮುಗ್ಧ ನಗುವನ್ನು ಸೂಸಿದ್ದರು. ನನಗೆ ಹೆಚ್ಚು ಬರೆಯುವ ಹವ್ಯಾಸ ಇದ್ದಿದ್ದರಿಂದ ನಾನೇನಾದ್ರೂ ಬರೆದ್ರೆ ಹೇಗಿದೆ? ಎಂದು ಹೊತ್ತಲ್ಲದ ಹೊತ್ತಿನಲ್ಲಿ ಸಂದೇಶ ಕಳುಹಿಸುತ್ತೇನೆ. ಆಗ ಅವರು ಅದಕ್ಕೆ ವಿಶ್ಲೇಷಣೆ ನೀಡುತ್ತಿದ್ದರು. ಹಾಗೆ ಸರಿಯಾದ ಸಲಹೆ ನೀಡುತ್ತಿದ್ದರು. ನಂತರ ನಾನು "ಸಾರಿ ಮೇಡಂ" ಅಂತ ಸಂದೇಶ ಕಳುಹಿಸುತ್ತಿದ್ದೆ. ಆಗ ಅವರು ಸಾರಿ ಯಾಕೆ. .. .? ಎಂದು ಮತ್ತೆ ಹಿಂತಿರುಗಿ ಸಂದೇಶ ಕಳುಹಿಸುತ್ತಿದ್ದರು. ಅದಕ್ಕೆ ನಾನು 'ಇಷ್ಟೊತ್ತಿನಲ್ಲಿ ನಿಮ್ಗೆ ಮೆಸೆಜ್ ಮಾಡಿ ತೊಂದ್ರೆ ಕೊಟ್ಟಿದ್ದಕ್ಕೆ (ರಾತ್ರಿ 12.30) ಅಂತ ಹಿಂತಿರುಗಿ ಸಂದೇಶ ಕಳುಹಿಸುತ್ತಿದ್ದೆ. ಅದಕ್ಕೆ ಅವರು "ಪರವಾಗಿಲ್ಲ ಬಿಡಿ. . .. .ಈ ಸಾರಿ ಫಾರ್ಮಲಿಟೀಸ್ ಬೇಡ. .. ... " ಅಂತ ಮತ್ತೆ ಹಿಂತುರಿಗಿ ಸಂದೇಶ ಕಳುಹಿಸುತ್ತಿದ್ದರು.

ತಾನ್ಯ ಅವರು ಎಲ್ಲಾದ್ರೂ ಹೊರಗೆ ಸಿಟಿಗೆ ಹೋಗುವಾಗ ನನಗೆ ತಿಳಿಸುತ್ತಿದ್ದರು. (ಮೊಬೈಲ್ ಸಂದೇಶದ ಮೂಲಕ) ಅದಕ್ಕೆ ನಾನು ಎಲ್ಲ ಮಕ್ಕಳ ಮೇಲಿರುವ ಗೌರವದಂತೆ ಇವರಿಗೂ. . ... ಹುಷಾರಾಗಿ ಹೋಗಿ ಬನ್ನಿ ಅಂತ ನನ್ನ ಸಂದೇಶ ರವಾನಿಸುತ್ತಿದ್ದೆ. ಕೊನೆಗೆ ಅವರು ಮನೆಗೆ (ರೂಂ) ಸೇರಿದ ನಂತರ ಮತ್ತೆ ನನಗೆ ಸಂದೇಶ ಕಳಿಸಿ ರೂಂ ತಲುಪಿದ ವಿಷಯ ತಿಳಿಸುತ್ತಿದ್ದರು. "ಈಗಷ್ಟೆ ಮನೆಗೆ ಬಂದೆ ಊಟನೂ ಆಯ್ತು ಮಲಗ್ತಾ ಇದ್ದಿನಿ. . .ನೀವೂ ಊಟಮಾಡಿ ಮಲಗಿ ಶುಭರಾತ್ರಿ. ." ಈ ಸಂದೇಶದೊಂದಿಗೆ ಅಂದಿನ ದಿನ ಕೊನೆಗೊಳ್ಳುತ್ತಿತ್ತು.

ಒಂದು ದಿನ ನಾನು " ನನ್ನ ಕೆಲಸವನ್ನು ಬಿಟ್ಟು ಬೇರೆ ಕೆಲಸದ ಮೇಲೆ ಊರಿಗೆ ಹೋಗ್ತೀನಿ ಇನ್ನು ಮುಂದೆ ನಿಮಗೆ ಸಿಗೋದಿಲ್ಲ.. " ಅಂತ ಹೇಳಿ ನನ್ನ ಊರಿಗೆ ಹೋಗಿದ್ದೆ. ನಾನು ಮತ್ತೆ ಬೆಂಗಳೂರಿಗೆ ಹಿಂತಿರುಗಿ ಬರುವ ಯೋಚನೆಯೂ ಇರಲಿಲ್ಲ. ಆದರೆ ಮತ್ತೆ ನನ್ನನ್ನು ಒಂದು ವಾರದ ನಂತರ ನಮ್ಮ ಬಾಸ್ ವಾಪಾಸ್ ಕರೆಸಿಕೊಂಡರು. ಇಲ್ಲಿಯೇ ಕೆಲಸ ಮಾಡುವಂತೆ ಒತ್ತಾಯಿಸಿದರು. ನಾನು ಮತ್ತೆ ವಾಪಾಸ್ಸು ಬಂದ ವಿಷಯ ತಿಳಿದ ತಾನ್ಯ ಮೇಡಂ ಅವರು " ಸದ್ಯ ವಾಪಾಸ್ ಬಂದ್ರಲ್ಲಾ ಅಷ್ಟೇ ಸಾಕು. .." ಎಂದು ನನ್ನ ಮೊಬೈಲ್ ಗೆ ಮೇಸೆಜ್ ಮಾಡಿದರು. ಅದಕ್ಕೆ ನಾನು ಅವರಿಗೆ ಒಂದು ವಿಷಯ ಹೇಳಿದೆ. " ನಾನು ಊರಿಂದ ಬೆಂಗಳೂರಿಗೆ ಬರುವಾಗ ಬಸ್ ಸ್ಟ್ಯಾಂಡಿಗೆ ಬಂದು ಮತ್ತೆ ಅಮ್ಮನ ಮೇಲೆ ನೆನಪಾಗಿ ವಾಪಾಸ್ ಮನೆಗೆ ಹೋದೆ. . ಮನೆಯಲ್ಲಿ ಯಾಕೆ ವಾಪಾಸ್ ಬಂದೆ? ಅಂತ ಕೇಳಿದ್ರು ನಾನು 'ಬಸ್ ತಪ್ಪೋಯ್ತು' ಅಂತ ಸುಳ್ಲು ಹೇಳಿದ್ದೆ.. ."ಹೀಗಂತ ನನ್ನ ಮೊಬೈಲ್ ನಿಂದ ಒಂದು ಸಂದೇಶ ಕಳುಹಿಸಿದೆ. ಅದಕ್ಕೆ ಅವರು. .. ಕಳುಹಿಸಿದ ಸಂದೇಶ ಹೀಗಿತ್ತು. "ಓಹ್ .. ! ಹಾಗಾದ್ರೆ ಇಲ್ಲೂ ನಿಮಗೆ ಯಾರನ್ನೋ ನೋಡಬೇಕು ಅನಿಸಿರಬೇಕು. ಅದಕ್ಕೆ ವಾಪಾಸ್ ಬಂದಿದ್ದಾ.. . ? ಅದು ಯಾರು. . .? ಹೇಳಿ ಪ್ಲೀಸ್" ಅಂತ ಹಟ ಹಿಡಿದಿದ್ದರು. .ನಾನು ಬೇರೆ ಏನಾದ್ರೂ ಮಾತಾಡೋಣಾ. . ? ಅಂತ ಹೇಳಿ ಅವರ ಕುತೂಹಲಕ್ಕೆ ಪೂರ್ಣ ವಿರಾಮ ಹಾಕಿದೆ. ಇಷ್ಟೆಲ್ಲಾ ಆಗಿದ್ದು ನಿಜ.. .ತಾನ್ಯ ಅವರ ಬಗ್ಗೆ ನನ್ಗೆ ತುಂಬಾ ಗೌರವವಿದೆ. ಅವರಿಗೆ ನನ್ನ ಬಗ್ಗೆ ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ..ಇದು ಸ್ನೇಹನಾ.. ..? ಪ್ರೀತಿನಾ. .?ಗೌರವಾನಾ. .. . ?ಮತ್ತೆನ್ನೇನು. . .? ಪ್ರಿಯ ಓದುದರೇ. .. ಈ ಭಾವನೆ ಯಾವುದು? ದಯವಿಟ್ಟು ಇದಕ್ಕೊಂದು ಹೆಸರಿಡಿ ಪ್ಲೀಸ್

-ಇಂತಿ ಹುಚ್ಚು ಭಾವನೆಗಳ ಸರದಾರ- ಕವೀಶ್ ಶೃಂಗೇರಿ ಮೊ:9945342433

No comments:

Post a Comment