Saturday, May 2, 2009

ಭಾವಾಂತರಂಗ -೫

"ಬೆಳದಿಂಗಳಾಗಿ ಬಾ. .. ."

ಎರಡು ದಿನ ಆಯ್ತು.. ಊಟ ಸೇರ್ತಿಲ್ಲ.. ನಿದಿರೆ ಅಂತೂ ಮರತೇ ಹೋಗಿದೆ ಬಿಡಿ.. ಯಾಕೆ ಅಂತ ಮನಸ್ಸನ್ನು ಕೇಳಿದ್ರೆ ಬಾಯಿ ಬಿಡ್ಲಿಲ್ಲ. .. ಸರಿ ನಿನ್ನೆ ರಾತ್ರಿ 12.30 ಕ್ಕೆ ಮನೆಗೆ ಹೋದ ಮೇಲೆ ನನ್ ಮನಸ್ಸನ್ನು ಪರ್ಸನಲ್ ಡೈರಿ ಮುಂದೆ ಕೂರಿಸಿ, ಮನಸಿಗೆ 90 ಕೋಡೇಸ್ ರಮ್ ಕುಡಿಸಿ ಏನಾಯ್ತು ಹೇಳು ಮನಸೇ ಅಂಥ ಕೇಳಿದಾಗ.. ಅದು ಯಾರಿಗೂ ಅರ್ಥವಾಗದ ರೀತಿಯಲ್ಲಿ ಎರಡು ಲೈನ್ ಗೀಚಿ-ಗೀಚಿ ಮುಗುಳ್ ನಕ್ಕಿತು.. ಕೊನೆಗೂ ಆ ಮುಗುಳ್ ನಗೆ ಆರ್ಥ..ಅರ್ಥ ಆಗ್ಲೇ ಇಲ್ಲಾ..

ಇದಕ್ಕ್ಕೆಲ್ಲಾ ಕಾರಣ ಇಲ್ಲಿದೆ ನೋಡಿ..ಜೋರಾದ ಉಸಿರಾಟದೊಂದಿಗೆ ಹೆದರುತ್ತ ನನಗೆ ಅಂದು ಫೋನ್ ಮಾಡಿ ನನ್ನೆದೆಗೆ ಕಚಗುಳಿ ಇಟ್ಟ' ಸಂಯಮಾ'ಳ ಮಾತು ಹೀಗಿತ್ತು..... "ನೆನಪಾಯ್ತು ಅದ್ಕೆ ಫೋನ್ ಮಾಡಿದೆ.. ಯಾಕೆ ಮಾಡಬಾರದಿತ್ತ.." ಅಂದಳು 'ಸಂಯಮ; ನಾನು "ರೀ ..ರೀ.. ಯಾಕ್ ಹೆದರುತಾ ಇದ್ದೀರಾ... ಚೆನ್ನಾಗಿದ್ದೀರಾ..?" ಅಂದೆ. ಅದಕ್ಕೆ ಸಂಯಮಾ ಹೇಳಿದ್ದು.. " ಇಲ್ಲಾ ಚೆನ್ನಾಗಿಲ್ಲ. ನೀವು ನನ್ನ ನೋಡೋಕೆ ಬಂದಿಲ್ವಲ್ಲಾ" ಅಂದಳು. ಅವಳ ಆ ಮಾತಿಗೆ ನಾನು ಏನಂತಾ ಹೇಳಬೇಕು ತಿಳಿಯಲಿಲ್ಲ... ಕಾರಣ " ನಾನಿನ್ನು ಆ 'ಸಂಯಮಾಳನ್ನು ನೋಡಿಲ್ಲ ಸಂಯಮ ಬೆಳದಿಂಗಳ ಬಾಲೆ" ಆ ದಿನ ಫೋನ್ ನಲ್ಲಿ ನಡೆದ 5 ನಿಮಿಷದ ಸಂಭಾಷಣೆ ಇನ್ನೂ ನನ್ನ ಅಂತರಂಗದಲ್ಲಿ ಮೃದಂಗವೊಂದು ಥೋಂ.. ಥೋಂ... ಎಂದು ಬಡಿದಂತೆ ಆಗುತ್ತಿದೆ...!

ಒಂದು ಸಾರಿ ಸಂಯಮಾಳಿಂದ ಫೋನ್ ಬಂದಾಗ ಅವಳ ಆ ಮಾತನ್ನು ಕೇಳಿ ಅವಳಿಗೆ ಬುದ್ಧಿ ಹೇಳಲಾಗಸ ಸ್ಥಿತಿಯಲ್ಲಿ ನಾನಿದ್ದೆ. ಆಗ ಆ ಸಂಭಾಷಣೆ ಹೀಗಿತ್ತು." ನನ್ನ ಮೊಬೈಲಿನಲ್ಲಿ ಕರೆನ್ಸಿ ಇಲ್ಲ. 5 ರೂಪಾಯಿ ಇದೆ. ಅದು ನಿಮ್ಮ ಹತ್ರ ಮಾತನಾಡುವಾಗಲೇ ಕರೆನ್ಸಿ ಖಾಲಿ ಆಗಲಿ" ಹೀಗೆಂದು ಪ್ರತಿಸಾರಿ ಅವಳ ಮೊಬೈಲ್ ಕರೆನ್ಸಿ ನನ್ನ ಬಳಿ ಮಾತನಾದಲು ಮೀಸಲಿಡುತ್ತಿದ್ದಳು ಸಂಯಮ.

ಅಬ್ಬಾ.. ಸಂಯಮಾಳ ಆ ಪ್ರೀತಿಯ ಮುಂದೆ ಈ ಕವಿಯ ಗುಂಡಿಗೆ ಪೀಸ್...ಪೀಸ್....! ಪ್ರತಿದಿನ ಸೂರ್ಯ ಹುಟ್ಟುತ್ತಾನೋ ಇಲ್ಲವೋ ಗೊತ್ತಿಲ್ಲ ಆದ್ರೆ ಸಂಯಮ ಅವರಿಂದ ಬೆಳಿಗ್ಗೆ ಗುಡ್ ಮಾರ್ನಿಂಗ್ ಮೆಸೇಜ್ ಬಂದೇ ಬರುತ್ತೆ.. ಮಧ್ಯಾಹ್ನ ಆದ್ರೆ "ಊಟ ಮಾಡಿ...ಇನ್ನೂ ಯಾಕೆ ಊಟ ಮಾಡಿಲ್ಲ.. ಟೈಮ್ ಗೆ ಸರಿಯಾಗಿ ಊಟ ಮಾಡಬಾರದಾ? ಹೆಲ್ತ್ ನ ಹೀಗೆಲ್ಲಾ ಹಾಳ್ ಮಾಡ್ಕೋಂತಾರಾ..?" ಅಂತ ಫೋನ್ ಮಾಡ್ತಾಳೆ. ರಾತ್ರಿ ಆದೆ "ರೀ ಇವತ್ತು ಕುಡಿಬೇಡಿ... ಬೇಗ ಮನೆಗೆ ಹೋಗಿ ಊಟ ಮಾಡಿ ಮಲ್ಕೊಳ್ಳಿ..ಕುಡಿಬೇಡಿ ಪ್ಲೀಸ್ ನಾನು ಮತ್ತೆ 15 ನಿಮಿಷದ ನಂತರ ಫೋನ್ ಮಾಡ್ತೀನಿ. ಅಷ್ಟೊತ್ತಿನೊಳಗೆ ಊಟ ಮಾಡಿ ಮಲಗೋಕೆ ರೆಡಿ ಆಗಿ.... ಇಲ್ಲಾಂದ್ರೆ ನಾನೂ ಊಟ ಮಾಡಲ್ಲ.. ಅಷ್ಟೇ" ಹೀಗಂತ ಹೇಳಿ.. ಮತ್ತೆ 15 ನಿಮಿಷದ ನಂತರ ಫೋನ್ ಮಾಡಿ " ಊಟ ಆಯ್ತಾ? ಸರಿ ರಾತ್ರಿ ಎಲ್ಲಾ ಬರೆಯುತ್ತಾ ಕೂತೀರ್ ಬೇಡಿ ಬೇಗ ಮಲಗಿ ಬೇಗ ಏಳಿ.... ಗುಡ್ ನೈಟ್ ಅಂತ ಹೇಳಿ ಫೋನ್ ಕಟ್ ಮಾಡ್ತಾಳೆ... ಸಂಯಮ.

ರಾತ್ರಿ 2.30ಕ್ಕೆ ಮತ್ತೆ ಫೋನ್ ಮಾಡಿ "ರೀ .. ನಿದ್ರೆ ಬರ್ತಾ ಇಲ್ಲಾ ಪ್ಲೀಸ್ ಒಂದ್ ಡೈಲಾಗ್ ಹೇಳ್ತೀರಾ..ಮತ್ತೊಂದು ಹಾಡು...." ಹೀಗೆ ಅವಳು ನನ್ನಿಂದ ಡೈಲಾಗ್.. ಹಾಡು.. ಹೇಳಿಸಿಕೊಂಡು ನನ್ನ ಹಾಡಿನೊಂದಿಗೆ ಸಂಯಮ ನಿದ್ರೆ ಹೋಗ್ತಾಳೆ...!

ಬೆಳಗಾದ್ರೆ ಮತ್ತದೇ ಗುಡ್ ಮಾರ್ನಿಂಗ್ ಮೆಸೆಜ್ ಅದರ ಜೊತೆಗೆ ಮತ್ತೊಂದು ಮೆಸೆಜ್ "ರಾತ್ರಿ ನನಗೆ ಬಿದ್ದ ಕನಸು ನಿಮಗೂ ಬಿದ್ದಿದ್ದಿದ್ರೆ ..ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ" ಅಮ್ತ ಮೆಸೆಜ್ ಮಾಡ್ತಾಳೆ. "ಅದೆಂಥ ಕನಸು ರೀ.. ನನಗೂ ಸ್ವಲ್ಪ ಹೇಳಿ" ಅಂತ ನಾನು ಕೇಳಿದ್ರೆ

"ರೀ ..ಸುಮ್ನಿರಿ...ನನ್ಗೆ ನಾಚಿಕೆ ಆಗುತ್ತೆ" ಅಂತಾಳೆ.. ಅವಲು ನನಗೋಸ್ಕರ ಒಂದು ಬಿಎಸ್ ಎನ್ ಎಲ್ ಸಿಮ್ ಕಾರ್ಡ್ ಉಪಯೋಗಿಸುತ್ತಿದ್ದಾಳೆ. ಅವಳ ಹತ್ತಿರ ಎರಡು ಮೊಬೈಲ್ ಇದೆಯಂತೆ. ಬಿಎಸ್ಸೆನ್ನೆಲ್ ಸಿಮ್ ಗೆ ಅವಳಿಗೆ ಬೇರೆ ಯಾವ ಕರೆಯು ಬರುವುದಿಲ್ಲ. ಒಂದು ವೇಳೆ ಆ ಬಿಎಸ್ಸೆನ್ನೆಲ್ ಮೊಬೈಲ್ ರಿಂಗ್ ಆದರೆ ಅದು ನನ್ನದೇ ಫೋನ್ ಅಂತ ಕನ್ ಫರ್ಮ್ ಅಂತೆ. ಹಾಗಂತ ಅವಳೆ ಹೇಳಿದಳು. "ರೀ ...ನನ್ನ ಮೊಬೈಲ್ ನಲ್ಲಿ ನಾನು ನಿಮ್ಮ ಹೆಸರನ್ನು ಫೀಡ್ ಮಾಡಿಕೊಂಡಿಲ್ಲ.. ಬದಲಿಗೆ "ನನ್ನವನು" ಅಂತ ನಿಮ್ಮ ನಂಬರ್ ಫೀಡ್ ಮಾಡಿಕೊಂಡಿದ್ದೇನೆ. ನೀವೂನೂ "ನನ್ನವಳು" ಫೀಡ್ ಮಾಡ್ಕೊಳ್ಳಿ" ಹಾಗಂತ ಹೇಳಿದಳು ಸಂಯಮ. ಅವಳ ಈ ಮಾತನ್ನು ಕೇಳಿ ನನ್ನ ಬರವಣಿಗೆಗೂ ನಿಲುಕದ ಭಾವನೆ ಹಾಡಾಗಿಯೇ ಬಿಟ್ಟಿತು.

ಆತ್ಮಗಳ ಆಕರ್ಷಣೆಗೆ..
ಮೌನದ ಈ ಸಂಭಾಷಣೆಯೇ...
ಸೂಚನೆ ...ಸೂಚನೆ...ಸೂಚನೆ..
ಪ್ರೀತಿ ಎಂದರೆ
ಎರಡು ಮನಗಳ
ಮಧುರ ಭಾವನೆ
ಪ್ರೀತಿ ಎಂದರೆ
ನಾಲ್ಕು ಕಂಗಳ
ಮಧುರ ಯಾತನೆ
ಹೃದಯಾನೆ ಇದರ ಅರಮನೆ....
ಭಾವನೆಯೇ ಇದರ ಸೆರೆಮನೆ...


ಇಷ್ಟು ದಿನವಾದರೂ ನಾನಿನ್ನೂ ಸಂಯಯಾಳನ್ನು ನೋಡಿಲ್ಲ. ನೋಡುವ ಪ್ರಯತ್ನವನ್ನೂ ಮಾಡಿಲ್ಲ. ಅವಳ ಆ ಮೊಬೈಲ್ ನಂಬರ್ ಯಾರ ಹೆಸರಲ್ಲಿದೆ ಅಂತ ಕಂಡೂ ಹಿಡಿಯುವ ಪ್ರಯತ್ನವನ್ನು ಮಾಡಿಲ್ಲ.

ಒಂದಂತೂ ಸತ್ಯ " ಅವಳ ಆ ಪ್ರೀತಿಯ ಅರಮನೆ ಬಹಳ ದೊಡ್ಡದು. ಆ ಅರಮನೆ ಛಾವಡಿಯಲ್ಲಿ ನಾವಿಬ್ಬರು ಜೊತೆಯಾಗಿ ಕುಳಿತು ಬೆಳದಿಂಗಳ ಸವಿ ಸವಿಯುವ ಆಸೆ ಸಂಯಾಳದ್ದು.." ಆದರೆ..ಈ ಕವಿಗೆ ತನ್ನನ್ನು ಮತ್ತು ಬರವಣಿಗೆಯನ್ನು ಪ್ರೀತಿಸುವ ಸಂಯಮ ಎಲ್ಲಿ ಕಿತ್ತು ಕೊಳ್ತಾಳೋ ಎಂಬ ಭಯದೊಂದಿಗೆ, ನನ್ನೆದೆ ಒಳಗಡೆ ಸಂಗಾತಿಗೆ ಅಂತ ಇರುವ ಬೆಚ್ಚನೆಯ ಪ್ರೀತಿಯಲ್ಲಿ ಅವಳು ಎಲ್ಲಿ ಕರಗಿ ಹೋಗ್ತಾಳೋ ಎನ್ನುವ ಭಯವಿದೆ.....

"ಸಂಯಮ ಅವರೆ... ನಾನು ಒಂದು ಚಿಕ್ಕ ಸಲಹೆ ಕೊಡ್ತೀನಿ...ತಾಳ್ಮೆ ಇದ್ರೆ ಕೇಳಿ.... ನಾನಿನ್ನೂ ನಿಮ್ಮನ್ನು ನೋಡಿಲ್ಲ...ಆದ್ರೆ ನಿಮ್ಮ ರೂಪ ೦ಗುಣ ಎಲ್ಲವೂ ನಾನು ಅರಿಯಬಲ್ಲೆ ನನ್ನ ಲೈಫ್ ಗಾಳಿಗೆ ಸಿಕ್ಕ ಗಾಳಿಪಟ ಆಗಿದೆ.. ನೀವು ನಿಮ್ಮ ಅಪ್ಪ -ಅಮ್ಮ ತೋರಿಸಿದ ಹುಡುಗನನ್ನು ನೋಡಿ ಮದುವೆಯಾಗಿ ಚೆನ್ನಾಗಿರಿ.. ಪ್ಲೀಸ್ ನನ್ನೂ ನಿಮ್ಮ ಮದುವೆಗೆ ಕರೀರಿ.. ಕರಿತೀರಾ ತಾನೆ.. ಯಾಕೆಂದ್ರೆ ನಾನೂ ನಿಮ್ಮನ್ನೂ ಒಂದ್ಸಾರಿಯಾದ್ರೂ ನೋಡಬೇಕು ಅನಿಸ್ತಾ ಇದೆ....!

ಇಂತಿ -ಬರವಣಿಗೆಗೂ ನಿಲುಕದ ಭಾವನೆ
-ಕವೀಶ್ ಶೃಂಗೇರಿ-99453 42433

No comments:

Post a Comment