Saturday, May 2, 2009

ಭಾವಾಂತರಂಗ- ೭

"ಈ ಪ್ರೀತಿ ಹೀಗೇನಾ...."

ಅಪ್ಪನಿಂದ ಬೈಸಿಕೊಂಡರೂ ಸರಿಯೇ.. ಅಮ್ಮನಿಂದ ಉಗಿಸಿಕೊಂಡರೂ ಸರಿಯೇ.. ಅಣ್ಣನಿಂದ ಹೊಡೆಸಿಕೊಂಡರೂಸರಿಯೇ.. ವರ್ಷಕ್ಕೆ ಒಂದೇ ದಿನ ಬರೋದು 'ವ್ಯಾಲೆನ್ ಟೈನ್ಸ್ ಡೇ" ನಾಳೆ ಏನಾದ್ರೂ ಆಗ್ಲಿ.. ಅವ್ಳಿಗೆ ಹೇಳೆಬಿಡ್ತೀನಿ.."ನೀನಂದ್ರೆ ನನಗಿಷ್ಟ ಅಂತ.." ಹೀಗಂತ ಅನಿಸಿದ್ದು ಒಂದು ದಿನ..ಕಾರಣ ಬೆಳಗಾದ್ರೆ ಫೆಬ್ರವರಿ 14 ನಡೆದದ್ದು ಏನು ಅಂತ ಹೇಳ್ತೀನಿ ಕೇಳಿ...

ನಾನೀಗ ಹೇಳೋಕೆ ಹೊರಟಿರೋ ಹುಡುಗಿ.. ನೋಡೋಕೆ ತೆಳ್ಳಗೆ, ಸುಂದರ ಮುಖ, ಸೌಮ್ಯ ಸ್ವಭಾವ..ನಕ್ಕರೆಗುಳಿಬಿದ್ದ ಕೆನ್ನೆ, ಉದ್ದವಾದ ಜಡೆ, ಎಲ್ಲರೊಂದಿಗೆ ಸ್ನೇಹದಿಂದ ಬೆರೆಯುವ ಮುಗ್ಧ ಮನಸ್ಸು ಅವಳ ಕಣ್ಣಂತೂ..ಆಹಾ! ಅವಳ ಕಣ್ ಗಳನ್ನ ನೋಡ್ತಿದ್ರೆ ಯಾವುದೋ ಒಂದು ಮಧುರವಾದ ಭಾವನೆ ಓಡಿಬಂದು ಹೃದಯಾನತಬ್ಬಿಕೊಂಡ ಹಾಗೆ ಅನುಭವ ಆಗ್ತಿತ್ತು..ಒಟ್ಟಾರೆಯಾಗಿ ಹುಡುಗಿ ಪಕ್ಕಾ ಸತ್ಯನಾರಾಯಣ ಪೂಜೆಯ ಪ್ರಸಾದ... ಅವಳ ಹೆಸರು "ಅರ್ಚನಾ" ಅಂತ....

ಅರ್ಚನಾ ಬಗ್ಗೆ ಮೊದಲು ನನಗಿದ್ದದ್ದು ಅಯ್ಯೋ ಪಾಪ ಮುಗ್ಧೆ ಎನ್ನುವ ಕನಿಕರ ಮಾತ್ರ...! ನಾನು ಕಾಲೇಜಿನಲ್ಲಿ ಎಲ್ಲಾ ಹುಡುಗರಿಗೂ..ಗೆಳಯರಿಗೂ ಲವ್ ಲೆಟರ್ ಬರೆದುಕೊಡುತ್ತಿದ್ದೆ. ಎಲ್ಲಾ ಹುಡುಗರೂ ನನ್ನ ಕಾಡಿಸಿ-ಪೀಡಿಸಿ ಲವ್ ಲೆಟರ್ ಬರೆಸಿಕೊಳ್ಳುತ್ತಿದ್ದರು. ನಾನು ಹುಡುಗರ ಹೆಸರಿನಲ್ಲಿ ಬರೆದ ಲೆಟರನ್ನು ಓದಿದ ಹುಡುಗಿಯರು.. ಲೆಟರ್ ಕೊಟ್ಟ ಹುಡುಗಿಗೆ 100% ಮನಸೋತು ಅಲ್ಲೇ 'ಹೃದಯ ಸಂಗಮ' ಆಗುವಂತೆ ಮಾಡುತ್ತಿದ್ದೆ. ನಮ್ಮಕಾಲೇಜಿನಲ್ಲಿ ಎಲ್ಲಾ ಹುಡುಗರು ನನ್ ಹತ್ರ ಬರೆದು ಕೊಡು ಗುರೂ... ಅಂತ ನನ್ನ ಮನೆವರೆಗೂ ಅದೆಷ್ಟು ಸಾರಿ ನನ್ನಹಿಂದೆ ದುಂಬಾಲು ಬಿದ್ದು ಬಂದಿದ್ದರು. ಅವರಿಗೆಲ್ಲಾ ನಾನು ನಿದಿರೆಗೆಟ್ಟು ಲವ್ ಲೆಟರ್ ಬರೆದುಕೊಡುತ್ತಿದ್ದೆ. ಅದುಸಕ್ಸಸ್ಸೂ ಆಗುತ್ತಿತ್ತು. ಪಾಪಿ ನನ್ಮಕ್ಳು.. ನನ್ನ ಮುದ್ದಾದ ಬರವಣಿಗೆಯನ್ನು ಕೆಲವರು ದುರುಪಯೋಗಪಡಿಸಿಕೊಂಡಿದ್ದಾರೆ. ಅದೆಷ್ಟೋ ಮನಸ್ಸುಗಳ ಮೈನಕ್ಕೆ ಮುನ್ನುಡಿ ಬರೆದಿರೋ ಏಕೈಕ ವ್ಯಕ್ತಿ ನಾನು.

ಒಂದು ದಿನ ನವೀನ ನನ್ನ ಹತ್ರ ಬಂದ..ಕವೀ..ಕವೀ.. ಎಂದು ನನ್ನಿಂದೆ ಸುತ್ತುತ್ತಿದ್ದ ...ನಾನು ನನ್ನ ಕಾಲೇಜ್ದಿನಗಳಲ್ಲಿ ದೂರದರ್ಶನಕ್ಕೆ ಎಂದು ಧಾರವಾಹಿಯಲ್ಲಿ ಸಂಭಾಷಣೆಕಾರನಾಗಿ.. ಮತ್ತು ಸಹ ನಿರ್ದೇಶಕನಾಗಿ ಕೆಲಸಮಾಡುತ್ತಿದ್ದೆ. ಇಂಥ ನನ್ನ ಕಾರ್ಯೋತ್ತಡ ಇದ್ದರೂ ನವೀನನ ತಳಮಳ ನನದೂ ಅರ್ಥವಾಗುತ್ತಿತ್ತು. ಒಟ್ಟಾರೆಯಾಗಿ ಅವನ ಬೆಂಬಿಡದ ಕಾಟ ತಾಳಲಾರದೆ..ಅವನಿಗೆ ಲವ್ ಲೆಟರ್ ಬರೆದು ಕೊಡುವ ಮನಸ್ಸುಮಾಡಿದೆ. "ಹುಡುಗಿ ಯಾರೂ ಗುರೂ ಎಂದೆ. ಅವನು 'ಅರ್ಚನಾ ಅಂದ. ಆಗ ನನ್ನ ಮನಸ್ಸು ಹಿಂಜರಿಯಿತು. ಕಾರಣ, ಪಾಪ ಮುಗ್ಡ ಹುಡುಗಿನಾ ...ಇವನೇನಾದ್ರೂ ಹಾಳುಮಾಡಿದ್ರೆ? ಅವಳೂ ಮುಗ್ಢ ಹುಡುಗಿ..ಅವಳ ಬಗ್ಗೆ ನಿನಗೆಕನಿಕರ ಇದೆ. ಹುತ್ತಕ್ಕೆ ಕೈ ಹಾಕಿದ್ದಾನಲ್ಲಾ.. ಎಂದು ಕೊಂಡೆ. ನಂತರ ನನ್ನ ಮನಸ್ಸು ಅಂಥಹಾ ಮುಗ್ಧ ಹುಡುಗಿಗೆನವೀನನ ಹೆಸರಲ್ಲಿ ನಾನು ಲೆಟರ್ ಬರೆದುಕೊಡಲು ಹಿಂಜರಿದೆ. ಆದರೆ, ಅಂದು ಅವನ ಒತ್ತಡಕ್ಕೆ ಲವ್ ಲೆಟರ್ಬರೆದುಕೊಟ್ಟೆ.

...ಪ್ರಿಯ ಹೃದಯ..ಓಂ..ನಮ.. .. ಪ್ರೇಮ.. ಒಂದಾಗಿಸೇ....ಪ್ರೇಮಾ...
ಹಾಯ್ ಹಾಯ್ ಮೈ ಸ್ವೀಟ್ ಹಾರ್ಟ್..ಯುವರ್ ಹಾರ್ಟ್ ಇಸ್ ವೇರಿ ಡಿಯರ್ ಅಂಡ್ ನಿಯರ್ ಟು ಮೈಹಾರ್ಟ್..ಹೀಗೆ ಮುಂದುವರೆಸಿದೆ.

ನನ್ನ ಬರವಣಿಗೆಯಲ್ಲಿದ್ದ ದಮ್ಮು.. ಮುಗ್ಧ ಹುಡುಗಿ ಹಾರ್ಟ್ ಆವರಿಸಿದ್ದು ನಿಜ. ಲೆಟರ್ ನಿಂದ ಅರ್ಚನಾ..! ಲೆಟರ್ ನಿಂದ ಅರ್ಚನಾ ಚೇತರಿಸಿಕೊಳ್ಳಲು ಬಹಳ ಕಷ್ಟ ಆಯ್ತು ಅನಿಸುತ್ತೆ. ಕಾರಣ ಆಗ ತಾನೆ 16 ಹರೆಯಕ್ಕೆಕಾಲಿಟ್ಟಿದ್ದಳು ಅರ್ಚನಾ..! ಇಡೀ ಕಾಲೇಜಿನಲ್ಲಿ ಅವಳೇ ಸುಂದರ ಹುಡುಗಿ ಜೊತೆಗೆ ಅವಳು ತುಂಬಾ ಸೌಮ್ಯಸ್ವಭಾವದ ಸೂಕ್ಷ್ಮ ಮನಸ್ಸಿನ ಹುಡುಗಿ..ಅರ್ಚನಾ ಅಂದ್ರೆ ಎಲ್ಲರಿಗೂ ಇಷ್ಟಾನೆ.. ನನಗೂ ಇಷ್ಟ..ಇಷ್ಟ.. ಅಷ್ಟೇ..!

ಅರ್ಚನಾಗೆ ಒಬ್ಬಳು ಗೆಳತಿ ಇದ್ದಳು. ಅವಳ ಹೆಸರು ಬಿಂದು. ಸದಾ ಅರ್ಚನಾಳ ಜೊತೆಯಲ್ಲೇ ಇರುತ್ತಿದ್ದ ಬಿಂದುಅರ್ಚನಾಳ ಊರಿನವಳೇ. ಹಾಗೆಯೇ ಇವರಿಬ್ಬರೂ ತುಂಬಾ ಆತ್ಮೀಯರು. ಬಿಂದುವಿಗೆ ನನ್ನ ಬಗ್ಗೆ ಸಂಪೂರ್ಣಗೊತ್ತಿತ್ತು. ನಾನು ಕುಡಿಯೋದರಿಂದ ಹಿಡಿದು ಭಾವನೆಗಳಿಗೆ ಬಣ್ಣ ಹಚ್ಚುವ ಹಾಗೆ ಬರೆಯುವ ತನಕನೂ 'ಬಿಂದು' ಗೆನನ್ ಬಗ್ಗೆ ಗೊತ್ತು. ಬಹುಶಃ ಕಥೆಯ ಕ್ಲೈಮಾಕ್ಸ್ ಗೆ ಇದೇ ಕಾರಣವಾಯ್ತೋ ಏನೋ ಗೊತ್ತಿಲ್ಲ.. ಆದರೆ ಅದೆಲ್ಲವೂಅನುಪಮ'.

ಒಂದು ದಿನ ನಾನು ದೂರದರ್ಶನಕ್ಕೆ ಒಂದು ಕಿರುಚಿತ್ರ ಚಿತ್ರೀಕರಣಕ್ಕೆ ಶೃಂಗೇರಿ ಸಮೀಪ ಒಂದು ಬ್ರಾಹ್ಮಣರಮನೆಗೆ ಹೋಗಿದ್ದೆ( ಸಹ ನಿರ್ದೇಶಕನಾಗಿ) ಕಿರುಚಿತ್ರದ ಚಿತ್ರೀಕರನವೂ ಮರುದಿನವೂ ಇದ್ದ ಕಾರಣ ನಾವೆಲ್ಲಅಲಿಯೇ ಉಳಿದಿದ್ದೆವು. ಬ್ರಾಹ್ಮಣರ ಮನೆಯಲ್ಲಿ ಅಂದು 'ತುಳಸೀದೀಪ' ಅದು ಚಳಿಗಾಲ ಬೇರೆ...ಅಲ್ಲಿಗೆ ಅರ್ಚನಾಬಂದಿದ್ದಳು ಕಾರಣ ಅದು ಅರ್ಚನಾಳ ಗೆಲತಿಯ ಮನೆ . ಅರ್ಚನಾ ಬರುವ ವಿಷಯ ನನಗೂ ತಿಳಿದಿರಲಿಲ್ಲ. ಆಗಸಮಯ ಸುಮಾರು 8 ಗಂಟೆ ರಾತ್ರಿ. ತುಳಸಿದೀಪದ ಪೂಜೆಯ ಸಮಯದಲ್ಲಿ ಅಲ್ಲಿದ್ದ ಹುಡುಗರು ಒಂದು ಪಟಾಕಿಯಸರವನ್ನು ಹಚ್ಚಿ ನಾನು ಮತ್ತು ಅರ್ಚನಾ ನಿಂತಿದ್ದ ಸ್ಥಳದಲ್ಲಿ ಹಾಕಿದರು. ಪಟಾಕಿ ಸಿಡಿಯಲು ಪ್ರಾರಂಭಿಸಿತು. ಅದೂ ಅರ್ಚನಾಳ ಕಾಲ ಕೆಳಗೆ...! ಅರ್ಚನಾ ನನ್ನ ಮುಂದೆಯೇ ನಿಂತಿದ್ದಳು..ಆಗ! ಪಟಾಕಿಯ ಸದ್ದಿಗೆ ಹೆದರಿದಅರ್ಚನಾ ಕಣ್ಮುಚ್ಚಿ 'ಅಮ್ಮಾ' ಎಂದು ಹಿಂತಿರುಗಿ ಗಟ್ಟೊಯಾಗಿ ತಬಿಕೊಂಡದ್ದು ನನ್ನನ್ನೇ...!

ಅಲ್ಲಿ ಸಮಯದಲ್ಲಿ ಸುಮಾರು 25 ಜನ ಇದ್ದರು. ಸುಮಾರು ಒಂದು ನಿಮಿಷಗಳ ಕಾಲ ಪಟಾಕಿಯ ಸಿಡಿತಡಬ್-ಡಬ್' ಎನ್ನುವ ಸದ್ದಾದರೆ, ಕವಿಯ ಹೃದಯದಲ್ಲಿ 'ಲಬ್-ಡಬ್'. ಕಾರಣ 25 ಜನರ ಮುಂದೆ ಇಂತಹದೃಶ್ಯ..! ಒಂದು ರೀತಿ ಸಿನಿಮಾ ಕಥೆ ಇದ್ದ ಹಾಗೆ...!

ಕ್ಷಣದಲ್ಲಿ ನನಗೆ ನಾಳೆ ಮಾಡಬೇಕಾದ ಚಿತ್ರೀಕರಣದ ಯೋಜನೆಗಳೆಲ್ಲಾ.. ಎಲ್ಲಿ ಮಾಯವಾಗಿದ್ದವೋ ಗೊತ್ತಿಲ್ಲ..!

'ಮನಸ್ಸು ಮೃದುವಾಗಿತ್ತು ನಾಚಿ ನೀರಾಗಿತ್ತು.. ಅನುಭವ ಹೇಗಿತ್ತು ಅಂದರೆ ಅಬ್ಬಾ.. ಅನುಪಮ..! ಪಟಾಕಿಸಿಡಿಯುವುದು ನಿಲ್ಲುವವರೆಗೆ..ಅರ್ಚನಾ ನನ್ನ ತಬ್ಬಿಕೊಂಡಿದ್ದಳು.. ಅವಳ ಮುಗ್ಧ ಮುಖ ನನ್ನ ಎದೆಯ ಗೂಡಲ್ಲಿರೆಪ್ಪೆಯೊಳಗಿನ ಕಣ್ಣಂತೆ ಭದ್ರವಾಗಿತ್ತು..! ನಂತರ ಮನೆಯಲ್ಲಿ ಊಟದ ಸಮಯ. ಆಗ ಸುಮಾರು 9.30 ಇರಬಹುದು. ನಾನು ನಾಳಿನ ಚಿತ್ರೀಕರಣದ ಬಗ್ಗೆ ಏನನ್ನೋ ಬರೆಯುತ್ತಾ ಕುಳಿತಿದ್ದೆ.. ಆಗ ಒಂದು ಧ್ವನಿ ನನ್ನರೀ..ಊಟಕೆ..ಕರೀತಿದ್ದಾರೆ..."ಎಂದು ಕರೆದರು... ತಲೆ ಎತ್ತಿ ನೋಡಿದರೆ ಅರ್ಚನಾ...ನನಗೂ ಘಟನೆಯಿಂದನಾಚಿಕೆ..! ಅರ್ಚನಾಗೂ..ನಾಚಿಕೆ..!

ಊಟವೆಲ್ಲ್ಲಾ ಮುಗಿದ ಮೇಲೆ ಅರ್ಚನಾ ಮತ್ತು ಅವಳ ಗೆಳತಿಯರು ಎಲ್ಲರೂ ಸೇರಿ 'ಅಂತ್ಯಾಕ್ಷರಿ' ಸ್ಪರ್ಧೆಶುರುಮಾಡಿದರು. ನನ್ನನ್ನೂ ಬಲವಂತವಾಗಿ ಅವರೆಲ್ಲಾ ಸ್ಪರ್ಧೆಗೆ ಸೇರಿಸಿಕೊಂಡರು. ಅರ್ಚನಾ..ನನ್ನ 'ಎದುರುಪಾರ್ಟಿ' ಅವಳು ಅಂದು ಹಾಡಿದ ಹಾಡಿಗೆ ನನ್ನ ಪ್ರತಿ ಹಾಡು.."ಏಕೆ.. ಹೀಗಾಯ್ತು ನಾನು ಕಾಣೆನೂ.. ಪ್ರೀತಿಮನದಲ್ಲಿ ಹೇಗೆ ಮೂಡಿತೋ.. ನೋಟದಲಿ..ಅದು ಏನಿದಿಯೋ.. ತುಟಿ ಅಂಚಿನಲಿ..ಸವಿ ಜೇನಿದೆಯೋ..ನೀಲಿಬಾನಲಿ ತೇಲಿ ಹೋದೆನು ನನು ದಿನ.. "ಎಂದು ಅಂದು ಹಾಡಿದ್ದೆ. ಸೊಗಸಾದ ರಾತ್ರಿಯ ಅಂತ್ಯಾಕ್ಷರಿ ಸ್ಪರ್ಧೆಇಂದಿಗೂ ನೆನಪಿದೆ...!ಇಷ್ಟೆಲ್ಲಾ ಆದ ಎರಡು ದಿನದ ನಂತರ ನಾನು ಕಾಲೇಜಿಗೆ ಹೋದಾಗ ಅರ್ಚನಾ ಮತ್ತು ಅವಳಗೆಳತಿ ಬಿಂದು ಇಬ್ಬರೇ ಏನೋ ನನ್ನನ್ನು ನೋಡಿ ಗುಟ್ಟಾಗಿ ಮಾತನಾಡಿಕೊಳ್ಳುತ್ತಿದ್ದರು. ನನ್ನ ಪಾಡಿಗೆ ನಾನುಸುಮ್ಮನಿದ್ದೆ. ಮಧ್ಯಾಹ್ನ ಕ್ಲಾಸ್ ಬಿಟ್ಟಾಗ ನಾನು ಹೊರಗಡೆ ಬರುತ್ತಿದ್ದೆ. ಆಗ ಒಂದು ದನಿ ನನಗೆ 'ಎಕ್ಸ್ ಕ್ಯೂಸ್ ಮೀ..' ಎಂದಿತು. ನಾನು ತಿರುಗಿ ನೋಡಿದರೆ ಅರ್ಚನಾ. ಅವಳ ಕೈಯಲ್ಲೊಂದು ಪತ್ರ..! ಪತ್ರ ನಾನೇ ನವೀನನಹೆಸರಿನಲ್ಲಿ ಅರ್ಚನಾಳಿಗೆ ಬರೆದ ಪತ್ರ..!

ನಾನು "ಏನಿದು..!?" ಎಂದೆ.
ನನ್ನ ಪ್ರಶ್ನೆಗೆ ಅರ್ಚನಾ " ಪ್ರಶ್ನೇನಾ ನಾನ್ ನಿಮ್ಗೆ ಕೇಳಬೇಕು" ಎಂದಳು.
ನಾನು 'ಅರ್ಥ ಆಗಲಿಲ್ಲ ಎಂದೆ.

ಆಗ ಶುರುವಾಯ್ತು ನೋಡಿ..ಅರ್ಚನಾ ಒಂದೇ ಉಸಿರಿನ ಮಾತು.. "ರೀ ಇಂಥಾ ಪಾಪದ ಕೆಲ್ಸನಾ ಯಾವತ್ತುಮಾಡಬೇಡಿ ಕವಿ.. ನನಗೆ ಹಾಗೂ ಇಡೀ ಕಾಲೇಜಿಗೆ ನಿಮ್ ಬಗ್ಗೆ ಒಂದು ಗೌರವವಿದೆ. ಯಾರೋ ವ್ಯಕ್ತಿಗಳ ಸಹವಾಸಮಾಡಿ ಇಂಥಾ ಕೆಲ್ಸ ಮಾಡಬೇಡಿ. ನಾನು ಲೆಟರ್ ಓದಿದಾಗ್ಲೆ ಅಂದ್ಕೊಂಡೆ ಲೆಟರ್ 'ನವೀನ' ಬರೆಯೋಕೆಸಾಧ್ಯಾನೇ ಇಲ್ಲ.. ಆವಾಗ 'ಬಿಂದು' ನೆ ಹೇಳಿದ್ದು.. ಆಗ್ಲೆ ಗೊತ್ತಾಗಿದ್ದು ಪ್ರೀತಿಯ ಪತ್ರದ ಮುದ್ದಾದ ಅಕ್ಷರ ಮಧುರಭಾವನೆ ಎಲ್ಲಾ ನೀನೆ ಅಂತ ..ಹ್ಞೂ ..ನಾನ್ ಇಷ್ಟ ಪಟ್ಟಿರೋದು.. ಮುದ್ದಿಸೊ ಮುದ್ದಾದ ಅಕ್ಷರಗಳನ್ನು, ಮಧುರವಾದ ಭಾವನೆಯನ್ನ ಅಷ್ಟೇ, ನಿಮ್ಮ ಬರಹ ಹಾಗಿದೆ. " ಎದೆನಾ ಸೀಳಿ..ನನ್ ಹೃದಯಕ್ಕೊಂದು ಪಪ್ಪಿಕೊಟ್ಟ ಹಾಗಿತ್ತು. ಅಂದ್ರೆ ಎದೇನಾ ಸೀಳಿದ ನೋವು..ಜೊತೆಗೆ ಹೃದಯಕ್ಕೆ ಕಿಸ್ ಕೊಟ್ಟ ಹಿತ ಇವೆರಡೂ ಸೇರಿ ನನ್ಹೃದಯದ ಊರಲ್ಲಿ ಮನಸಿನ ತೇರಲ್ಲಿ ಅದೇನೋ ಕೋಲಾಹಲ. ಇವತ್ತೆ ..ಈಗ್ಲೇ ಹೇಳ್ತೀನಿ.." ಲವ್ ಯು" ಅಂತಾಎಂದಳು ಅರ್ಚನಾ...

ಲೈಫ್ ನಲ್ಲಿ ಫಸ್ಟ್ ಟೈಮ್ ಒಂದು ಹುಡುಗಿಯಿಂದ ಇಂಥಾ ಮಾತನ್ನು ಕೇಳಿದ್ದೇ. ಅವಳು ಹೇಳಿದ ಮಾತುಸರಿಯಾಗಿತ್ತು. ನಾನೇ ಮಾಡಿದ್ದು ತಪ್ಪು ಅನ್ನಿಸಿತ್ತು. ಕ್ಷಣ ಅರ್ಚನಾಳ ಮುದ್ದು ಜೀವದ ಪ್ರೀತಿಗೆ ನಾನು ಎಲ್ಲೋಒಂದು ಕಡೆ ಮಾರುಹೋಗಿದ್ದೆ. ಆದರೆ ಮುಗ್ಢ ಹುಡುಗಿಗೆ ನಾನು ಎಂದಿಗೂ ದ್ರೋಹ ಮಾಡಬಾರದೆಂಬ ಮಾನವೀಯತೆ ನನ್ನೊಂದಿಗಿತ್ತು. ನಂತರ ಮುಂದೇನಾಯ್ತು ಅಂತ ಕುತೂಹಲವೇ..? ಹಾಗಾದರೆ ನೀವು ಫೋನ್ಮಾಡಿ ಎಸ್ ಎಂಎಸ್ ಮಾಡಿ ಕೇಳಬಹುದು.

ಕವೀಶ್ ಶೃಂಗೇರಿ. ಫೋನ್: 9945342433,

2 comments:

  1. ಕವೀಶ್, ಕಥನ ಸುಂದರವಾಗಿ ಮೂಡಿ ಬಂದಿದೆ.
    ಅಭಿನಂದನೆಗಳು...

    ReplyDelete